ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು.!
ತುಂಗಾವಾಣಿ.
ಬೂದಗುಂಪ: ಪೆ-19 ಹತ್ತಿರದ ಗುಡದಳ್ಳಿ ಹತ್ತಿರ ಭೀಕರ ರಸ್ತೆ ಅಪಘಾತ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಇಬ್ಬರು ಯುವಕರು ಗಿಣಗೇರ ಕಡೆಯಿಂದ ಬೂದಗುಂಪ ಕಡೆ ಬರುತ್ತಿದ್ದ ವೇಳೆ, ಗಂಗಾವತಿ ಯಿಂದ ಕೊಪ್ಪಳದ ಮಾರ್ಗವಾಗಿ ಹೊರಟಿದ್ದ ಗಂಗಾವತಿ ಡಿಪೋ ಗೆ ಸಂಬಂಧಿಸಿದ ENKSRTC ಬಸ್ ಚಾಲಕನ ನಿರ್ಲಕ್ಷ್ಯ ದಿಂದ ಮುಖಾಮುಖಿ ಡಿಕ್ಕಿ ಸಂಭವಿಸಿ ವಸಂತಕುಮಾರ (29) ವಿಜಯಕುಮಾರ್ (23) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ, ಇಬ್ಬರು ಟಿ,ಬಿ,ಡ್ಯಾಮ್ ನಿವಾಸಿಗಳು ಎಂದು ಮುನಿರಾಬಾದ್ PSI ತುಂಗಾವಾಣಿಗೆ ತಿಳಿಸಿದ್ದಾರೆ,
ಸ್ಥಳಕ್ಕೆ: ಮುನಿರಾಬಾದ್ ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.