ಜಿಲ್ಲೆಯಲ್ಲಿ ಇಂದು 50 ಪಾಜಿಟಿವ್ ಪತ್ತೆ.
HDFC ಬ್ಯಾಂಕ್ ಸೀಲ್ ಡೌನ್..!

ತುಂಗಾವಾಣಿ.
ಕೊಪ್ಪಳ: ಜುಲೈ,30 ಜಿಲ್ಲೆಯಲ್ಲಿ ಇಂದು 50 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿದೆ ಸೊಂಕಿತರ ಸಂಖ್ಯೆ, 1096 ಸೊಂಕಿತರು, ಜಿಲ್ಲೆಯಲ್ಲಿ ಇಂದು 50 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 30,
ಕುಷ್ಟಗಿ ತಾಲೂಕಿನಲ್ಲಿ 7,
ಕೊಪ್ಪಳ ತಾಲೂಕಿನಲ್ಲಿ 7 ಯಲಬುರ್ಗಾ ತಾಲ್ಲೂಕಿನಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ,
ಇಂದು ಗುಣಮುಖರಾಗಿ ಬಿಡುಗಡೆ ಯಾದವರು 45 ಜನ,
ಒಟ್ಟಾರೆ ಜಿಲ್ಲೆಯಲ್ಲಿ ಬಿಡುಗಡೆ ಯಾದವರು 689 ,
206 ಜನರು ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಹೋಮ್ ಐಸೋಲೆಷನ್ ನಲ್ಲಿ 116. ಜನರಿದ್ದಾರೆ,
61 ಜನರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ,
ಒಟ್ಟು ಇದುವರೆಗೆ 24 ಜನ ಸಾವನ್ನಪ್ಪಿದ್ದಾರೆ..!

ಗಂಗಾವತಿ ನಗರದ HDFC ಬ್ಯಾಂಕ್ ನ ಮೂರು ಜನ ಸಿಬ್ಬಂದಿಗಳಿಗೆ ಸೊಂಕು ದೃಢಪಟ್ಟಿದೆ, ಬ್ಯಾಂಕ್ ನ ವ್ಯವಸ್ಥಾಪಕ ಅರವಿಂದ ಸಚ್ಚಿದಾನಂದ ತುಂಗಾವಾಣಿ ಯೊಂದಿಗೆ ಮಾತನಾಡಿ ನಮ್ಮಲ್ಲಿ ಮೂರು ಜನರಿಗೆ ಸೊಂಕು ದೃಢಪಟ್ಟಿದ್ದು ಅವರನ್ನು ನಿಗದಿತ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇನ್ನೂ ಉಳಿದ ಸಿಬ್ಬಂದಿಗಳಿಗೆ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ, ನಮ್ಮ ಶಾಖೆ ಮೂರು ದಿನ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿಸಿದರು.

ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Tungavani News Latest Online Breaking News
